Sunday, November 15, 2009

ನಮ್ಮ ಶಿವಣ್ಣ ಹಾಗು ಪ್ರಕಾಶಣ್ಣ ನವರ ಪುಸ್ತಕ ಬಿಡುಗಡೆ....

ನಮಸ್ತೆ


ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಅಕ್ಷಯ ಪ್ರಕಾಶನದವರು ಹಮ್ಮಿಕೊಂಡಿದ್ದರು.. ಅದೇನೋ ಒಂದು ರೀತಿಯ ಕಂಡರಿಯದ ಸಂಭ್ರಮ ಸಡಗರ ಅಲ್ಲಿ ತುಂಬಿತ್ತು. ಬ್ಲಾಗ್ ಲೋಕದ ಮಿತ್ರರನೇಕರು ಅಲ್ಲಿ ನೆರೆದಿದ್ದರು. ಮೂರು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದವರೇ ಪುಸ್ತಕ ಬಿಡುಗಡೆ ಮಾಡಿದ್ದೂ ವಿಶೇಷ. ಪ್ರಕಾಶಣ್ಣನ " ಹೆಸರೇ ಬೇಡ" ಪುಸ್ತಕವನ್ನು ಪ್ರಸಿದ್ದ ಅಂಕಣಕಾರರಾದ ಶ್ರೀ ಜೀ.ಏನ್. ಮೋಹನ್ ರವರು, ಶಿವಣ್ಣನ " ವೆಂಡರ್ ಕಣ್ಣು" ಪುಸ್ತಕವನ್ನು ಶ್ರೀ ನಾಗೇಶ್ ಹೆಗ್ಡೆ ರವರು ಮತ್ತು ದಿವಾಕರ್ ಹೆಗ್ಡೆ ರವರ " ಉದ್ದಾರ -ಸಂತೆ" ಪುಸ್ತಕವನ್ನುಶ್ರೀ ಡಾ. ಬಿ.ವಿ. ರಾಜಾರಾಂ ರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ನಾಲ್ಕು ಮಾತನಾಡಿದರು.
ಪುಸ್ತಕಗಳ್ಳನ್ನು ಯಾರಾದರು ಲೇಖಕರೋ ಅಥವಾ ಸಾಹಿತಿಗಳೋ ಬರೆದಿದಲ್ಲಿ ಅಂತಹ ವಿಶೇಷವೇನು ಇರುತ್ತಿರಲ್ಲಿ. ಆದರೆ ನಾನು ಈಗ ಪರಿಚಯಿಸುತ್ತಿರುವ ಇಬ್ಬರು ವ್ಯಕ್ತಿಗಳು ನನಗೆ ಹಾಗು ನಮ್ಮೆಲರಿಗೆ ಸ್ಪೂರ್ತಿಯ ಚಿಲುಮೆಯನ್ನ ಚಿಮ್ಮುವಂಥಹವ್ಯಕ್ತಿತ್ವ ಉಳ್ಳವರು..
ಅವರ ಅನುಮತಿಯಿಲ್ಲದೆ ಅವರ ಬಗ್ಗೆ ಬರೆಯುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.
ಮೊದಲಿಗೆ ಶಿವಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಒಬ್ಬ ದಿನಗೂಲಿ ನೌಕರನ ಮಗನಾಗಿ ಜನಿಸಿ, ಸಣ್ಣ ವಯಸ್ಸಿನಲ್ಲೇ ವಿದ್ಯಾಬ್ಯಾಸ ಮುಂದುವರಿಸುತ್ತ ಪೇಪರ್ ಹಾಕುವ ಹುಡುಗನಾಗಿ ದುಡಿಯಲು ಶುರು ಮಾಡಿ, ನಂತರ ಅದ್ದನ್ನೇ ವೃತ್ತಿಯನ್ನಾಗಿಸಿಕೊಂಡು ಇಂದು ಪೇಪರ್ ಏಜೆಂಟ್ ಆಗಿ, ಪ್ರವೃತ್ತಿಯಲ್ಲಿ ಅಂತಾರಾಷ್ಟ್ರೀಯ ಫೋಟೋಗ್ರಾಫ್ ಆಗಿ ಖ್ಯಾತಿಗಳಿಸಿರುವ, ಹಲವಾರು ಪತ್ರಿಕೆಗಳಿಗೆ ಚಿತ್ರ ಲೇಖನ ಗಳ್ಳನ್ನು ಬರೆದಿರುವ ಇವರು, ಇಂದು ನಮ್ಮ ಮುಂದೆ ಒಂದು ಪುಸ್ತಕದ ಕರ್ತೃಗಳಾಗಿ ನಿಲ್ಲುತ್ತಿರುವುದೇ ಒಂದು ಅವಿಸ್ಮರಣೀಯ ವಿಷಯ. ಸಾಮಾನ್ಯವಾಗಿ ತಾವು ಬರೆಯುವ ಪುಸ್ತಕ ಗಳ್ಳನ್ನ ತಮ್ಮ ಹೆಂಡತಿಗೋ, ಮಕ್ಕಳಿಗೋ, ತಂದೆ- ತಾಯಿಯವರಿಗೋ ಅರ್ಪಿಸುವುದು ಸರ್ವೇ ಸಾಮಾನ್ಯ, ಆದರೆ ನಮ್ಮ ಶಿವಣ್ಣ ತಾನು ಬರೆದ ಪುಸ್ತಕವನ್ನು ಅರ್ಪಿಸಿರುವುದ್ದನ್ನು ನೀವು ತಿಳಿದರೆ ಅವರ ವ್ಯಕ್ತಿತ್ವ ಎಂಥವುದೆಂದು ತಿಳಿಯುತ್ತದೆ.
ಚಳಿ, ಗಾಳಿ, ಮಳೆ ಎನ್ನದೇ...
ತಣ್ಣನೆ ಮುಂಜಾವಿನಲ್ಲಿ.....
ಬೆಚ್ಚನೆಯ ಬೆಳಗು ತರುವ...
ಅಸಂಖ್ಯಾತ, ಅನಾಮಿಕ...
ದಿನಪತ್ರಿಕೆ ಹಂಚುವ....
ಹುಡುಗರಿಗೆ....
ಅವರ ಲೇಖನಗಳ್ಳನ್ನು ಓದಲು ಅವರ ಬ್ಲಾಗ್ ಹೊಕ್ಕಿ ನೋಡಿ: http://chaayakannadi.blogspot.com/

ಎರಡನೆಯದಾಗಿ ಪ್ರಕಾಶಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಇಟ್ಟಿಗೆ- ಸಿಮೆಂಟ್ ಖ್ಯಾತಿಯ ಪ್ರಕಾಶಣ್ಣ ವೃತ್ತಿಯಲ್ಲಿ ಒಬ್ಬ ಸಿವಿಲ್ ಇಂಜಿನಿಯರ್. ಆವರು ತಮ್ಮ ಬ್ಲಾಗ್ನಲ್ಲಿ ಬರೆಯುತಿದ್ದ ಲೇಖನಗಳ್ಳನ್ನು ಒಟ್ಟು ಗೂಡಿಸಿ ಹೊರ ತಂದಿರುವ ಹಾಸ್ಯ ಭರಿತ ಪುಸ್ತಕವೇ "ಹೆಸರೇ ಬೇಡ". ಅವರ ಬ್ಲಾಗ್ ವಿಳಾಸ : http://ittigecement.blogspot.com/


ಡಾ. ಬಿ. ವಿ. ರಾಜರಾಮ್ ರೊಂದಿಗೆ...
ಎಡದಿಂದ ಬಲಕ್ಕೆ: ಶಿವಣ್ಣ, ಜೀ.ಏನ್.ಮೋಹನ್, ಡಾ.ಬಿ.ವಿ.ರಾಜಾರಾಂ, ನಾಗೇಶ್ ಹೆಗ್ಡೆ, ಯಶವಂತ್ ಸರ್ದೇಶ್ ಪಾಂಡೆ, ದಿವಾಕರ್ ಹೆಗ್ಡೆ, ಸೀತಾರಾಮ ಹೆಗ್ಡೆ ಹಾಗು ಪ್ರಕಾಶಣ್ಣ.

ವಂದೇ ಮಾತರಂ


Sunday, October 11, 2009

ಮನವಿ

ನಮಸ್ತೆ

ಪ್ರಿಯ ಸ್ನೇಹಿತರೆ... ನಾನಿಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಹೊಸದೇನಲ್ಲ.... ಪ್ರಕೃತಿಯ ವಿಕೋಪಕ್ಕೆ( ಮನುಷ್ಯನ ಅಟ್ಟಹಾಸಕ್ಕೆ) ಸಿಲುಕಿ ನೆರೆಯ ಕಾರಣದಿಂದಾಗಿ ನಮ್ಮ ನಾಡಿನ (ಉತ್ತರ ಕರ್ನಾಟಕದ) ಅನೇಕ ಜೀವಗಳು ನರಳುತ್ತಿವೆ... ಅವರಿಗೆ ನೆರೆಯು ಹೊರೆಯಾಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಅದಮ್ಯ ಕರ್ತವ್ಯ.. ದಯವಿಟ್ಟು ನಿಮಗೆ ಸರಿಯೆನಿಸಿದ ದಾರಿಯಲ್ಲಿ ಸೇವೆಯನ್ನ ಸಲ್ಲಿಸ ಬೇಕಾಗಿ ವಿನಂತಿ..

ಹಾಗೆಯೇ ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಯನ್ನ ಸರಳವಾಗಿ ಆಚರಿಸಿ ಅನೇಕರ ಬಾಳಿಗೆ ಬೆಳಕಾಗ ಬೇಕಾಗಿ ಕೋರುತ್ತೇನೆ...













ವಂದೇ ಮಾತರಂ



Wednesday, September 23, 2009

ಹಣತೆ ೨೦೦೯ (೨೦-೨೧ ಸೆಪ್ಟೆಂಬರ್)

ನಮಸ್ತೆ
ಮೊನ್ನೆ ಭಾನುವಾರ ಮತ್ತು ಸೋಮವಾರ ವಿವೇಕ ಹಂಸ ಬಳಗ ನಡೆಸಿದ " ಸಾಂಸ್ಕೃತಿಕ- ಆಧ್ಯಾತ್ಮಿಕ- ವ್ಯಕ್ತಿತ್ವ ವಿಕಸನ" ಶಿಬಿರದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು ನಿಮಗಾಗಿ ...



ದ್ವಿತ್ರಯರು

ರಾಮಕ್ರಿಷಣ ಮಠದ ಅದ್ಯಕ್ಷರಾದ ಹರ್ಷನಂದ್ ಜೀ ಮಹಾರಾಜರಿಂದ ಚಾಲನೆ


"ಭಜಗೋವಿಂದಂ"-ಶ್ರೀ ಹರ್ಷಾನಂದ ಜೀ ಮಹಾರಾಜ್

"ದೂರದಿರಿ ಬದುಕ, ಬೆದಕರಿ ನಸುಕ"- ಶ್ರೀ ರಘೋತ್ತಮ ರಾವ್


" ಕಲಾಯೋಗ"- ಶ್ರೀ ಶತಾವಧಾನಿ ಗಣೇಶ್

"ಸದೃಢ ವ್ಯಕ್ತಿತ್ವ- ಸುಂದರ ಮನಸ್ಸು": ಡಾ. ಸಿ. ಅರ್ . ಸಿ

" ಜೀವಸಾಗರದ ಬಿಂದು, ಒಳಗನಂತ ಸಿಂಧು": ಶ್ರೀ ಗುರುರಾಜ್ ಕರಜಗಿ

"ಕಲಿಯುಗದ ಜೀವನ ಕಲೆ": ಶ್ರೀ ಬಸವರಾಜ್ ಪಾಟೀಲ್ ಸೇಡಂ

"ವಿವೇಕಾನಂದ ನಮಗಾನಂದ" : ಶ್ರೀ ಚಕ್ರವರ್ತಿ ಸೂಲಿಬೆಲೆ

"ನಗುನಗುತಾ ಬಾಳ್ ": ಶ್ರೀ ಮಾಸ್ಟರ್ ಹೀರಣಯ್ಯ


"ಭಕ್ತಿ ಕುಸುಮಾಂಜಲಿ": ಶ್ರೀಮತಿ ಎಂ. ಡಿ. ಪಲ್ಲವಿ


"ಜಾಗೋ ಭಾರತ್ ತಂಡದಿಂದ ದೇಶ ಭಕ್ತಿ ಗೀತೆಗಳ ಗಾಯನ"
"ಸಾರೆ ಜಹಂಸೆ ಅಚ್ಚ...." ಹಾಡಿಗೆ ಕೈ ಜೋಡಿಸಿದ ಕಂದಮ್ಮ

ವಂದೇ ಮಾತರಂ



Monday, September 14, 2009

ಶ್ರೀ ಸರ್. ಎಂ.ವಿ (೧೫-೦೯- ೧೮೬೦ ರಿಂದ ೧೪-೦೪-೧೯೬೨)

ನಮಸ್ತೆ

ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ತಮ್ಮ ಅಮೋಘ ಬುದ್ದಿಮತ್ತೆಯಿಂದ ರಾಷ್ಟ್ರದ ಚಿತ್ರವನ್ನೇ ಬದಲಿಸಿದ ಕರ್ನಾಟಕದ ಹೆಮ್ಮೆಯೇ ಪುತ್ರ ಸರ್.ಎಂ.ವಿ ಯವರಿಗೆ ಅನಂತ ಕೋಟಿ ವಂದನೆಗಳು.... ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ರಾಷ್ಟ್ರಸೇವೆಗೆ ತನ್ನನ್ನೇ ಅರ್ಪಿಸಿಕೊಂಡ ಮಹಾನುಭಾವನಿಗೆ ಜೈ ಹೋ...

ಸರ್.ಎಂ.ವಿ ಯವರ ಬಗ್ಗೆ ಸಂಕ್ಷಿಪ್ತ ವಿವರ:

ತಂದೆ-ತಾಯಿ: ಶ್ರೀ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಾಚಮ್ಮ
ಹುಟ್ಟಿದ ಊರು: ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.
ವಿದ್ಯಾಬ್ಯಾಸ: ಪ್ರಾಥಮಿಕ ಶಿಕ್ಷಣ- ಮುದ್ದೇನಹಳ್ಳಿ
ಪ್ರೌಢ ಶಿಕ್ಷಣ- ಬೆಂಗಳೂರು
ಬಿ.ಎ ಪದವಿ- ಮದ್ರಾಸ್ ವಿಶ್ವವಿದ್ಯಾಲಯ
ಬಿ.ಇ ಪದವಿ- ಸಿವಿಲ್ ಇಂಜಿನಿಯರಿಂಗ್, ಕಾಲೇಜ್ ಆಫ್ ಸೈನ್ಸ್, ಪೂಣೆ.
ನಿರ್ವಹಿಸಿದ ಜವಾಬ್ದಾರಿಗಳು: p.w.d ಇಂಜಿನಿಯರ್, ಮುಂಬೈ ( ಅಂದಿನ ಬೊಂಬಾಯಿ)
ದಿವಾನ್ ಆಫ್ ಮೈಸೂರ್. ಮತ್ತು ಹಲವಾರು...
ಪ್ರಮುಖ ಪ್ರಶಸ್ತಿಗಳು: The Knight Commander of The Indian Empire medal by British Emperors,
ಭಾರತ ರತ್ನ ಪ್ರಶಸ್ತಿ ೧೯೫೫.

ಅವರ ಸಾಧನೆಯನ್ನ ಗುರುತಿಸಿ ಅವರ ಜನ್ಮ ದಿನವನ್ನ "ಇಂಜಿನಿಯರ್'ಸ ಡೇ" ಎಂದು ಭಾರತ ಸರ್ಕಾರ ಘೋಷಿಸಿದೆ...

ಎಲ್ಲ ಅಭಿಯಂತರರಿಗೂ "ಇಂಜಿನಿಯರ್'ಸ ಡೇ" ಶುಭಾಶಯಗಳು....

ವಂದೇ ಮಾತರಂ...

Saturday, September 5, 2009

ಬ್ರಹ್ಮ+ವಿಷ್ಣು+ಮಹೇಶ್ವರ= ಗುರುವರ್ಯ

ನಮಸ್ತೆ
" ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರುವೇ ನಮಃ"
ಅರ್ಥ : ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು.

ಗುರಿ ಇರ ಬೇಕು ಮುಂದೆ ಗುರು ಇರಬೇಕು ಹಿಂದೆ ಎಂಬ ಮಾತು ಎಷ್ಟು ಸತ್ಯವಲ್ಲವೇ.... ಈ ದಡ್ಡನಿಗೆ ವಿದ್ಯಾದಾನ ಮಾಡಿದ ಎಲ್ಲ ಶಿಕ್ಷಕರಿಗೆ ಅನಂಥಕೋಟಿ ನಮಸ್ಕಾರಗಳು ಹಾಗು ಶಿಕ್ಷರ ದಿನಾಚರಣೆಯ ಶುಭಾಶಯಗಳು .ಇಂದು ನಾನೇನಾದರೂ ಸಾದಿಸಿದ್ದರೆ ಅದಕ್ಕೆ ಕಾರಣ ನನ್ನ ಶಿಕ್ಷಕರು. ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿ ತೀಡಿ ತಿದ್ದಿದಂತಹ ನನ್ನ ಶಿಕ್ಷಕರನ್ನು ನೆನಪು ಮಾಡಿಕೊಳ್ಳುವುದು ನನ್ನ ಅದಮ್ಯ ಕರ್ತವ್ಯ.
ಜೊತೆಗೆ ಶಿಕ್ಷಕ ವೃತ್ತಿಯನ್ನು ಕೀಳಾಗಿ ಕಾಣುವ ಜನೆರೆಡೆಗೆ ಒಂದು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತ ಈ ಲೇಖನವನ್ನು ಮುಗಿಸುತ್ತೇನೆ.

ಶ್ರೀ ಪುಜ್ಯನಿಯ ಸರ್ವೆಪಲ್ಲಿ ರಾಧಾಕೃಷ್ಣನ್




ವಂದೇ ಮಾತರಂ...

Sunday, August 16, 2009

ಜನನಿ ಜನ್ಮ ಭೂಮಿಶ್ಚ್ಯ, ಸ್ವರ್ಗಾದಪಿ ಗರಿಯೇಸಿ...

ನಮಸ್ತೆ
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಆಗಸ್ಟ್ ೧೫ ಎಂದರೆ ನನ್ನ ಮನಸ್ಸು ರೋಮಾಂಚನಗೊಳ್ಳುತ್ತದೆ .ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳುತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳುತಿದ್ದೆ. ಶಾಲೆ ಬಿಟ್ಟ ನಂತರ ಪ್ರತಿ ವರ್ಷವೂ ಯಾವುದಾದರು ಶಾಲಾ ಕಾರ್ಯಕ್ರಮದಲ್ಲಿ ಮೂಕ ವೀಕ್ಷಕನಾಗಿ ಭಾಗವಹಿಸಿ ನನ್ನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದೆ.

ಆದರೆ ಈ ಬಾರಿ ಉದ್ಯೋಗ ಗಳಿಸಿದ ನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆಯದ್ದರಿಂದ ಏನಾದರೂ ಹೊಸದಾಗಿ ಮಾಡಬೇಕೆನಿಸಿತು. ಆದರಿಂದ ನನಗೆ ಅ ಆ ಇ ಈ ಕಲಿಸಿದ ನಮ್ಮೂರ ಶಾಲೆಯಲ್ಲಿ ಆಚರಿಸಬೇಕೆಂದು ನಿಶ್ಚಯಿಸಿ ಮಕ್ಕಳ ಸಂಖ್ಯೆ ತಿಳಿಯಲು ಶಾಲಾ ಮುಖ್ಯಶಿಕ್ಷಕಿಯವರಿಗೆ ಫೋನಾಯಿಸಿದಾಗ ಅವರು ನನ್ನನ್ನೇ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದರು ( ಅದಕ್ಕೆ ಕಾರಣ ನಮ್ಮ ಅಜ್ಜನವರು ಆ ಶಾಲೆಯ ಹೇಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ). ಕಳೆದ ಶ್ಯೆಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಹೇಳಿ ಫೋನ್ ಇಟ್ಟೆ. ವಾರದ ಹಿಂದೆಯ ಕೊಡಬೇಕಾದ ಬಹುಮಾನಗಳನ್ನು ಹಾಗು ಶಾಲೆಯ ಆಷ್ಟು ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಕರಿದಿಸಿ ಇಟ್ಟು ಕೊಂಡೆ.

ಇಂದು ಬೆಳ್ಳಗೆ ೮:೦೦ ಗಂಟೆಗೆ ದ್ವಜರೋಹಣ ಕಾರ್ಯಕ್ರಮವಿತ್ತು. ನೆನ್ನೆ ಸುರಿದ ದಾರಕರ ಮಳೆಯಿಂದಾಗಿ ಮಕ್ಕಳು ಮಾಡಿಕೊಂಡಿದ್ದ ಸಕಲ ಸಿದ್ದತೆಗಳು ನೀರುಪಾಲಗಿದ್ದವು. ಆದರೂ ಸಹ ಕಂಗೆಡದೇ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಿದ್ದವಾಗಿದ್ದರು. ಸರಳವಾಗಿ ಸರಾಗವಾಗಿ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಬಹುಮಾನ ವಿತರಿಸಿ ಅವರೊಂದಿಗೆ ಪ್ರಭಾತ್ ಫೇರಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದಾಗ ಏನೋ ಕಂಡರಿಯದ ಖುಷಿಯಲ್ಲಿ ಮನಸ್ಸು ತೇಲುತಿತ್ತು..

ಅಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು...
ವಂದೇ ಮಾತರಂ...


Tuesday, August 11, 2009

ಸ್ವಾತಂತ್ಯ್ರ ಬಂದಿದ್ದು ಯಾರಿಗೆ ????

ನಮಸ್ತೆ
ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ತಾಯಿ ಭಾರತಾಂಬೆ ತನ್ನ ೬೨ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲಿದ್ದಾಳೆ. ಈ ಸಂಧರ್ಭದಲ್ಲಿ ಬಹಳ ದಿನಗಳಿಂದ ನನ್ನ ಮನಸಿನಲ್ಲಿದ್ದ(ಇರುವ) ಈ ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದೇನೆ. ನೀವೇ ಉತ್ತರಿಸಿ...

ಸುಮಾರು ೧೦೦೦ ವರ್ಷಗಳ ದಬ್ಬಾಳಿಕೆಯನ್ನ ಸಹಿಸಿಕೊಂಡು, ೨೦೦ ವರ್ಷಗಳ ಕಾಲ ಲಕ್ಷಾಂತರ ಜನರು ತಮ್ಮ ಜೀವನವನ್ನ ಮುಡಿಪಾಗಿಸಿ ತಮಗಾಗಿ ಅಲ್ಲದೆ ಮುಂದಿನ ಪೀಳಿಗೆ ಸುಖವಾಗಿರಲೆಂದು ಹೋರಾಡಿ ತಂದುಕೊಟ್ಟಂತಹ ಈ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕೊಡುತ್ತಿದ್ದೀವೆಯೇ ಎನ್ನುವ ಪ್ರೆಶ್ನೆ???

ಹಗಲು ರಾತ್ರಿಯೆನ್ನದೆ, ಚಳಿ ಗಾಳಿಯನ್ನದೆ ನಮ್ಮ ಗಡಿಗಳಲ್ಲಿ ಕ್ಷಣ ಕ್ಷಣವು ಸಾವನ್ನು ಎದುರಿಸುತ್ತ ತಮ್ಮ ಜೀವನವನ್ನ ಯಾರಿಗಾಗಿಯೋ ಮುಡಿಪಾಗಿಸಿ ಭಾರತಮಾತೆಗೆ ರಕ್ಷಾ ಕವಚವಾಗಿ ದುಡಿಯುತ್ತಿರುವ ನಮ್ಮ ಯೋಧ ಸಹೋದರರ ಶ್ರಮಕ್ಕೆ ನಾವು ಬೆಲೆ ಕೊಡುತ್ತಿದ್ದೀವೆಯೇ ಎನ್ನುವ ಮತ್ತೊಂದು ಪ್ರೆಶ್ನೆ???

ಬೆಳ್ಳಗ್ಗೆ ಎದ್ದೊಡನೆ ಕರೆಂಟ್ ಇಲ್ಲದಿದ್ದರೆ, ನಲ್ಲಿಯಲ್ಲಿ ನೀರು ಬಾರದಿದ್ದರೆ, ಮನೆ ಮುಂದಿನ ಕಸ ತೆಗೆಯುವವ ಬಾರದಿದ್ದರೆ, ರಸ್ತೆಯಲ್ಲಿ ಒಂದು ಗುಂಡಿ ಕಂಡರೆ, ಬಸ್ನಲ್ಲಿ ಸ್ವಲ್ಪ ರಶ್ ಇದ್ದರೆ, ನಮ್ಮ ರಾಜಕಾರಣಿಗಳನ್ನೂ ಅಥವಾ ಸರ್ಕಾರಿ ಅಧಿಕಾರಿಗಳನ್ನೂ ಇನ್ನು ಸ್ವಲ್ಪ ಮುಂದುವರಿಸಿ ಒಟ್ಟಾಗಿ ನಮ್ಮ ದೇಶವನ್ನೇ ಹಿಯಾಳಿಸುತ್ತ ಕೂರುವ ಮಾಹಾನುಭಾವರನ್ನ ನಿಮ್ಮ ಕೊಡುಗೆ ಏನು ಎಂದು ಕೇಳುವ ಆಸೆ???

ಕೆಳಗೆ ಇರುವ ಚಿತ್ರಗಳನ್ನ ನೋಡಿದ ನಂತರ ನಿಮ್ಮ ಮನಸ್ಸೇನಾದರು ಕಲುಕಿದರೆ ನಿಮ್ಮ ಜೀವನದಲ್ಲಿ ಒಬ್ಬ ಅನ್ಯ ಮಗುವಿನ ವಿದ್ಯಬ್ಯಾಸಕ್ಕೆ ನೆರವಾಗಿ...

















ವಂದೇ ಮಾತರಂ.....

Monday, August 3, 2009

ದಶಕ ಕಳೆದ ಸಂತೋಷದಲ್ಲಿ...

ನಮಸ್ತೆ
ಹತ್ತು ವರ್ಷ ನನ್ನನ್ನು ಸಾಕಿ ಸಲುಹಿದ ಹಾಗು ಸಲುಹುತ್ತಿರುವ ಬೆಂಗಳೂರೆಂಬ ಮಹಾ(ಯಾ)ನಗರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ರೈತನಾಗ ಬಯಸಿದ್ದವನನ್ನ ಒಬ್ಬ ಇಂಜಿನಿಯರ್, ಒಬ್ಬ ಅಧ್ಯಾಪಕನನ್ನಾಗಿ ಪರಿವರ್ತಿಸಿದ ಇ-ಊರಿಗೆ ಜೈ ಹೋ.

ನಾನು ಚಿಕ್ಕವನಿದ್ದಗಲಿಂದಲೂ ರೈತನಾಗಬೇಕೆಂಬ ತುಡಿತ ಬಹಳಷ್ಟಿತ್ತು. ಆದರೆ ನನ್ನ ತಾಯಿಯ ಆಸೆಯಂತೆ ಇಂಜಿನಿಯರ್ ಆಗಲು ಹತ್ತನೇ ತರಗತಿ ಮುಗಿಸಿದ ನಂತರ ೧೯೯೯ರ ಆಗಸ್ಟ್ ೨ ರಂದು ಬೆಂಗಳೂರಿಗೆ ಕಾಲಿಟ್ಟಾಗ ಇವನ್ನೊಬ್ಬ ಅಪ್ಪಟ ಹಳ್ಳಿ ಹೈದ( ನನ್ನ ಗೆಳೆಯರಿಗೆ ಹಾಗು ಸಹಪಾಟಿಗಳಿಗೆ ಹಳ್ಳಿ ಗುಗ್ಗು). ಮೊದ ಮೊದಲಿಗೆ ಹಳ್ಳಿಯವನೆಂದು ನನ್ನನ್ನು ಮಾತನಾಡಿಸಲು ಹಿಂಜರಿಯುತ್ತಿದ್ದ ನನ್ನ ಸಹಪಾಟಿಗಳು ನಂತರ ಒಬ್ಬಬರಾಗಿ ಒಳ್ಳೆಯ ಸ್ನೇಹಿತರಾದರು.

ಅಷ್ಟೇನೂ ಬುದ್ಧಿವಂತನಲ್ಲದ ನನ್ನನ್ನು ಬಹಳಷ್ಟು ಶ್ರದ್ದೆ ಮತ್ತು ಆಸಕ್ತಿಯಿಂದ ಬೆಳೆಸಿದ ನನ್ನ ಅಷ್ಟು ಮಂದಿ ಶಿಕ್ಷಕರಿಗೆ ನಾನು ಚಿರಋಣಿ. ದೊರೆತ ಸಾಫ್ಟವೇರ್ಇಂಜಿನಿಯರ್ ಉದ್ಯೋಗವನ್ನು ತ್ಯಜಿಸಿ ಅಧ್ಯಾಪಕ ವೃತ್ತಿಯನ್ನು ಅಯುದುಕೊಳ್ಳಲು ಅದೇ ಕಾರಣ.

ನನ್ನನ್ನು ಪರೋಕ್ಷವಾಗಿ ಮತ್ತು ಪ್ರತ್ಯೆಕ್ಷವಾಗಿ ಬೆಳೆಸಿದ ಎಲ್ಲರಿಗು ನಾನು ಚಿರಋಣಿ.

ಮುಂದೆ ಒಂದು ದಿನ ರೈತನಾಗುವೆನೆಂಬ ಆಶಯದೊಂದಿಗೆ ಜೀವಿಸುತ್ತಿರುವ....

ವಂದೇ ಮಾತರಂ..

Wednesday, July 15, 2009

ಇನ್ಫೋಸಿಸ್ ಎಂಬ ಮಹಾನಗರಿಯಲ್ಲಿ...

ನಮಸ್ತೆ
ಒಬ್ಬ ಸಾಮಾನ್ಯ ಶಾಲಾ ಮೇಷ್ಟ್ರ ಮಗ ಎಂಥಹ ಮಹಾನ್ ಸಾಧನೆಯನ್ನ ಮಾಡಬಹುದು ಎಂದು ನೋಡಲು ಒಮ್ಮೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಇನ್ಫೋಸಿಸ್ ಸಂಸ್ಥೆಗೆ ಹೋಗಿ ಬನ್ನಿ. ೨೮ ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಇಂಜಿನಿಯರ್ ಒಬ್ಬ ಕನಸು ಕಂಡದರ ಪರಿಣಾಮ ಇಂದು ಸಾವಿರಾರು ಕೋಟಿ ಬಾಳುವ , ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಭಾರತ ಮಾತೆಯ ಕೀರ್ತಿ ಪತಾಕೆಯನ್ನ ಪ್ರಪಂಚದೆಲ್ಲೆಡೆ ಪಸರಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ರತ್ನ ಶ್ರೀ ನಾರಾಯಣ ಮೂರ್ತಿಯಾವರಿಗೆ ಮತ್ತು ಅವರ ಸಂಗಡಿಗರಿಗೂ ಜೈ ಹೋ .
೧೯೯೯ರಲ್ಲಿ ನಾನು ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ ದಿನಗಳಿಂದಲೂ ನಾನು ಇನ್ಫೋಸಿಸ್ ಕಟ್ಟಡಗಳ್ಳನ್ನು ನೋಡಿ ಎಂದಾದರೂ ಒಂದು ದಿನ ಇಲ್ಲಿ ಪ್ರವೇಶ ಪಡೆಯಬೇಕೆಂಬ ಆಸೆ ನನ್ನ ಮನದಾಳದಲ್ಲಿ ಮೂಡಿತ್ತು .(ಬೆಂಗಳೂರಿನಿಂದ ನಮ್ಮ ಊರಿಗೆ ಹೋಗುವ ದಾರಿಯಲ್ಲಿ ಮುಖ್ಯರಸ್ತೆಯಲ್ಲೇ ಸಿಗುತ್ತದೆ).
ಮೊನ್ನೆ ಶಿಕ್ಷಕರಿಗಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೫ ದಿನಗಳ ಕಾರ್ಯಗಾರ ಒಂದಕ್ಕೆ ನಮ್ಮ ಕಾಲೇಜನ್ನು ಪ್ರತಿನಿದಿಸುವ ಅವಕಾಶ ನನಗೆ ಸಿಕ್ಕಾಗ ಏನೋ ಒಂದು ಕಂಡರಿಯದ ಆನಂದವನ್ನು ಅನುಭವಿಸಿದೆ. ಜೂನ್ ೨೨ ರಿಂದ ೨೬ ರವರೆಗೆ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಒಂದಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ. ಇತರೆ ಕಾಲೇಜುಗಳಿಂದ ಬಂದಿದ್ದ ಶಿಕ್ಷಕ ವೃಂದದ ಪರಿಚಯವು ಆಯಿತು.
ಅಲ್ಲಿ ಕ್ಲಿಕ್ಕಿಸಿದ ಒಂದಷ್ಟು ಫೋಟೋಗಳು...

ನಮ್ಮ ಪ್ರಾಜೆಕ್ಟ್ ಟೀಂನೊಂದಿಗೆ
ಹರ್ಕುಲೆಸ್ ಆಗುವ ಪ್ರಯತ್ನದಲ್ಲಿ

ಗೆಳೆಯ ಗಿರೀಶ್ ನೊಂದಿಗೆ ಎಲೆಕ್ಟ್ರಿಕ್ ಕಾರ್ ನಲ್ಲಿ

ಉದ್ಯಾನವನದಲ್ಲಿ




ನಮಗೆ ಅಚ್ಚುಕಟ್ಟಾಗಿ ಊಟ ಬಡಿಸಿದ ಸ್ನೇಹಿತ ರಾಜೇಶ್ ನೊಂದಿಗೆ...

ನನ್ನನ್ನು ಹೊರಲಾಗದೆ ಪಂಕ್ಚರ್ ಆದ ಬಡ ಸೈಕಲ್..

ಪಿರಮಿಡ್ ನಂತೆ ಕಾಣುವ ಗಾಜಿನ ಮನೆಯ ಮುಂದೆ..
ಕ್ಯಾಪ್ಶನ್ ನೀವೇ ಬರೆದುಕೊಳ್ಳಿ
ವಂದೇ ಮಾತರಂ