Thursday, May 28, 2009

ಕನ್ನಡ ಭವನದಲ್ಲಿನ ಕಲಾಕೃತಿಗಳು

ನಮಸ್ತೆ
ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನ ಪ್ರತಿಬಿಂಬಿಸುವ ಕೆಲವು ಕಲಾಕೃತಿಗಳ್ಳನ್ನ ನನ್ನ ಕ್ಯಾಮೆರಾ ಕಣ್ಣುಗಳ್ಳಲ್ಲಿ ಸೆರೆಹಿಡಿದಿದ್ದೇನೆ...










ವಂದೇ ಮಾತರಂ







Wednesday, May 27, 2009

ಒಂದು ಶೂ ಸುತ್ತ ಸುತ್ತುವ ಒಂದು ಅದ್ಭುತ ಚಲನಚಿತ್ರ....

ನಮಸ್ತೆ
ಇತ್ತಿಚಿನ ದಿನಗಳಲ್ಲಿ ಶೂಗಳು, ಬುಷ್ ನಿಂದ ಇಡಿದು ನಮ್ಮ ರಾಜಕಾರಣಿಗಳಿಗೆ ನಿದ್ದೆ ಕೆಡಿಸುತ್ತಿರುವ ವಿಚಾರ ತಿಳಿದೆ ಇದೆ. ಆದರೆ ಅದೇ ಶೂ ಅನ್ನು ಕಥಾವಸ್ತುವಗಿರಿಸಿಕೊಂಡು ಒಂದು ಅರ್ಥ ಪೂರ್ಣವಾದ ಚಿತ್ರವನ್ನ ಇರಾನಿನ ನಿರ್ದೇಶಕ ಮಜಿದ್ ಮಜಿದ್ಹಿ ಯವರು ತೆಗೆದಿದ್ದಾರೆ. children of heaven ಎಂಬ ಶೀರ್ಷಿಕೆ.
ಇರಾನಿನ ಒಂದು ಸಣ್ಣ ಬಡ ಕುಟುಂಬ. ತಂಗಿಯ ಹರಿದ ಶೂ ಅನ್ನು ಅಣ್ಣ ಹೊಲಿಸಲು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಕಳೆದುಕೊಂಡು ಮನೆಗೆ ಹಿಂತಿರುಗುತ್ತಾನೆ. ಮನೆಯಲ್ಲಿ ಹೊಸ ಶೂ ಕೊಳ್ಳಲು ಹಣವಿಲ್ಲ ವೆಂದರಿತು ಅಣ್ಣನ ಶೂವನ್ನೇ ತಂಗಿಯು ಬಳಿಸಲು ನಿರ್ದದರಿಸುತ್ತಾರೆ. ತಂಗಿಗೆ ಬೆಳ್ಳಿಗೆ ಶಾಲೆ, ಅಣ್ಣನಿಗೆ ಮದ್ಯನದ ಶಾಲೆ. ಆದರಿಂದ ಶಾಲೆ ಮುಗಿದ ತಕ್ಷಣ ತಂಗಿ ಓಡುತ್ತ ಬಂದು ಅಣ್ಣನಿಗೆ ಶೂ ರವಾನಿಸಬೇಕು. ಈ ಮದ್ಯೆ ಬರುವ ಸನ್ನಿವೇಶಗಳನ್ನು ನೀವೇ ನೋಡಿ ಅನುಭವಿಸಬೇಕು.
ಎಲ್ಲರು ನೋಡಲೇಬೇಕಾದ ಒಂದು ಅರ್ಥಪೂರ್ಣ ಚಲನಚಿತ್ರ...


ವಂದೇ ಮಾತರಂ

Monday, May 25, 2009

ನಮ್ಮ ಜೋಗಿಯ ಪುಸ್ತಕ ಬಿಡುಗಡೆ...


ನಮಸ್ತೆ
ಭಾನುವಾರ ನಮ್ಮ ಕನ್ನಡ ಭವನದಲ್ಲಿ ಮೆಚ್ಚಿನ ಲೇಖಕರಾದ ಶ್ರೀ ಜೋಗಿಯವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನ ಅಂಕಿತ ಪ್ರಕಾಶನದವರು ಹಮ್ಮಿಕೊಂಡಿದ್ದರು. ಕಾರ್ಯಕ್ರಮ್ಮಕ್ಕೆ ಮೆರುಗು ನೀಡಲು ಅನೇಕ ಗಣ್ಯಥಿ ಗಣ್ಯರು ಉಪಸ್ತಿತರಿದ್ದರು. ಶ್ರೀ ಹಂಸಲೇಖ, ಶ್ರೀ ತ.ನ. ಸೀತಾರಾಂ, ಶ್ರೀ ವಿಶ್ವೇಶ್ವರ ಭಟ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಮೋಹನ್, ಶ್ರೀ ಗೋಪಾಲಕೃಷ್ಣ ಕುಂಟಿನಿ ಅವರಲ್ಲಿ ಕೆಲವರು.
ಶ್ರೀ ಜೋಗಿ (ಗಿರೀಶ್ ರಾವ್) ರವರ "ಚಿಟ್ಟೆ ಹೆಜ್ಜೆ ಜಾಡು" ಪುಸ್ತಕ ಬಿಡುಗಡೆ ಮಾಡಿದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರವರು, ಅರ್ಥಿಕ ಹಿಂಜರಿತದಿಂದ ಜರ್ಜರಿತವಾದ ನಗರ ಜೀವನದ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತ ಪುಸ್ತಕದ ಬಗ್ಗೆ ಕೆಲವು ಮಾತಾಡಿದರು. ನಂತರ ಜೋಗಿರವರ "ಜೋಗಿಯ ಕಥೆಗಳು" ಪುಸ್ತಕ ಬಿಡುಗಡೆ ಮಾಡಿದ ಶ್ರೀ ಹಂಸಲೇಖ ರವರು, ತಿಳಿ ಹಾಸ್ಯದೊಂದಿಗೆ ಸಭೆಯನ್ನ ರಂಜಿಸಿದರು. ಶ್ರೀ ಗೋಪಾಲಕೃಷ್ಣ ಕುಂಟಿನಿ ರವರು ಮಾತನಾಡುತ್ತ ತಮ್ಮ ಮತ್ತು ಜೋಗಿಯವರ ಬಾಲ್ಯದಿನಗಳ ಸವಿಯನ್ನ ನಮ್ಮೊಂದಿಗೆ ಹಂಚಿಕೊಂಡರು.
ಬ್ಲಾಗ್ ಗೆಳೆಯರಾದ ಶಿವಣ್ಣ , ಮಲ್ಲಿಕಾರ್ಜುನ ಅಣ್ಣ , ಪರಾಂಜಪೆ ಸರ್, ಶಾಮಕ್ಕ, ಪ್ರಕಾಶಣ್ಣ, ವಿಕಾಸ್ ರವರ ಬೇಟಿ ಮನಸ್ಸಿಗೆ ಏನೋ ಒಂದು ತರಹದ ಖುಷಿ ನೀಡಿತು. ಎಂದಿನಂತೆ ಕೆಲವು ಗಣ್ಯರ ಹಸ್ತಾಕ್ಷರ ಪಡೆದು ಕೆಲವು ಗಣ್ಯರೊಂದಿಗೆ ಫೋಟೋ ಕ್ಲಿಕಿಸಿಕೊಂಡ ನಂತರ ಪುಸ್ತಕ ಖರಿದಿಸಿ ಎಲ್ಲರಿಗು ವಂದಿಸಿ ಅಮಿತನಂದದಿಂದ ಮಾಯವಾದೆ.
ಶೀ ಮೋಹನ್, ಶ್ರೀ ಹಂಸಲೇಖ, ಶೀ ಜೋಗಿ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಗೋಪಾಲ ಕೃಷ್ಣ ಕುಂಟಿನಿ,
ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರೊಂದಿಗೆ

ಶ್ರೀ T.N. ಸೀತಾರಾಂ ರೊಂದಿಗೆ,

ಶ್ರೀ ಹಂಸಲೇಖ ರೊಂದಿಗೆ
ವಂದೇ ಮಾತರಂ

Thursday, May 21, 2009

ಹಳೆ ವಿದ್ಯಾರ್ಥಿಗಳ ಮಿಲನಕೂಟ

ನಮಸ್ತೆ




ವೇಮನ ತಾಂತ್ರಿಕ ಮಹಾವಿದ್ಯಾಲಯ... ನಾನು ಓದಿದ ವಿದ್ಯಾ ಸಂಸ್ಥೆ.. ಹತ್ತನೆ ತರಗತಿಯಲ್ಲಿ ಎರಡನೇ ದರ್ಜೆಯೊಂದಿಗೆ ತೇರ್ಗಡೆಗೊಂಡು, ಆಗು-ಹೀಗೂ ಡಿಪ್ಲೋಮಾ ಮುಗಿಸಿ, ಇಂಜಿನಿಯರಿಂಗ್ ಪದವಿ ಪಡೆಯಲು ಪ್ರವೇಶ ಪಡೆದು ನಾನೆ ನಂಬಲು ಅಸಾಧ್ಯವಾದ ಪ್ರಗತಿಗೆ( ಉನ್ನತ ಪದವಿಯಲ್ಲಿ ವಿಶ್ವವಿದ್ಯನಿಲಯಕ್ಕೆ ಮೊದಲ ಸ್ಥಾನ) ಹಾಗು ನನ್ನಲ್ಲಿ ಜೀವನದ ಮೌಲ್ಯಗಳನ್ನ ತುಂಬಿ ಅಪೂರ್ವ ಬದಲಾವಣೆಗೆ ಕಾರಣವಾದ ವಿದ್ಯಾ ಸಂಸ್ಥೆ...


ಕಬ್ಬಿಣದ ಕಡಲೆಯಂತಿದ್ದ ಗಣಿತವನ್ನ ಬಹಳಷ್ಟು ಶ್ರದ್ದೆಯಿಂದ ಕಲಿಸಿದ ಶ್ರೀ ಸುರೇಶ್ ಸರ್, ಶ್ರೀ ಕೆಂಪೇಗೌಡ ಸರ್. ನನ್ನಲ್ಲಿ ಸಮಯಪ್ರಜ್ಞೆಯನ್ನ ಬೆಳೆಸಿದ ಶ್ರೀಮತಿ ಗೀತ ಮೇಡಂ, ನನ್ನಲ್ಲಿನ ನಾಯಕತ್ವ ಗುಣವನ್ನ ಬಯಲಿಗೆಳೆದ ಶ್ರೀ ಪ್ರಚೆತ್ ಸರ್, ನನ್ನನ್ನು ಸಮಾಜ ಸೇವಾ ಕಾರ್ಯ ಗಳ್ಳಲ್ಲಿ ತೊಡಗಲು ಬೆಂಬಲಿಸಿದ ನನ್ನ ಸಹಪಾಟಿಗಳು, ಹಿರಿಯರ ಸ್ತಾನದಲ್ಲಿ ನಿಂತು ನನ್ನ ಎಲ್ಲ ಚಟುವಟಿಕೆಗಳಿಗೆ ಬೆಂಬಲಿಸಿದ ನಮ್ಮ ಪ್ರಾಂಶುಪಾಲರಾದ ಶ್ರೀ ಡಾ. ರಂಗ ಮತ್ತು ಶ್ರೀ ಡಾ. ಯೆಲ್ಲ ರೆಡ್ಡಿ, ನನಗೆ ಪುಸ್ತಕ ಓದುವ ಗೀಳನ್ನ ಹತ್ಹಿಸಿದ ನಮ್ಮ ಗ್ರಂಥಪಾಲಕರಾದ ಶ್ರೀ ಅಶೋಕ್, ಶ್ರೀ ಮುರಳಿ, ಶ್ರೀ ಮೋಹನ್ ರವರಿಗೆ ನಾನು ಚಿರಋಣಿ...


ಇಷ್ಟೆಲ್ಲ ಮಾತಾಡಿದ್ದು ಮೊನ್ನೆ(20-May-2009) ನಡೆದ ನಮ್ಮ ಕಾಲೇಜಿನ ಹಳೆ ವಿದ್ಯರ್ಥಿಗಳ ಮಿಲನ ಕೂಟದಲ್ಲಿ. ತುಂಬ ಬಾವುಕನಾಗಿ ಮಾತಾಡಿದ್ದು ಅದೇ ಮೊದಲು. ನಾನು ವಿದ್ಯಾಬ್ಯಾಸ ಪಡೆದ ಸಂಸ್ಥೆ ಮತ್ತಷ್ಟು ಎತ್ಹರಕ್ಕೆ ಏರಲಿ ಏನ್ನುವುದೇ ನನ್ನ ಆಸೆ...


ವಂದೇ ಮಾತರಂ...