Monday, September 14, 2009

ಶ್ರೀ ಸರ್. ಎಂ.ವಿ (೧೫-೦೯- ೧೮೬೦ ರಿಂದ ೧೪-೦೪-೧೯೬೨)

ನಮಸ್ತೆ

ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ತಮ್ಮ ಅಮೋಘ ಬುದ್ದಿಮತ್ತೆಯಿಂದ ರಾಷ್ಟ್ರದ ಚಿತ್ರವನ್ನೇ ಬದಲಿಸಿದ ಕರ್ನಾಟಕದ ಹೆಮ್ಮೆಯೇ ಪುತ್ರ ಸರ್.ಎಂ.ವಿ ಯವರಿಗೆ ಅನಂತ ಕೋಟಿ ವಂದನೆಗಳು.... ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ರಾಷ್ಟ್ರಸೇವೆಗೆ ತನ್ನನ್ನೇ ಅರ್ಪಿಸಿಕೊಂಡ ಮಹಾನುಭಾವನಿಗೆ ಜೈ ಹೋ...

ಸರ್.ಎಂ.ವಿ ಯವರ ಬಗ್ಗೆ ಸಂಕ್ಷಿಪ್ತ ವಿವರ:

ತಂದೆ-ತಾಯಿ: ಶ್ರೀ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಾಚಮ್ಮ
ಹುಟ್ಟಿದ ಊರು: ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.
ವಿದ್ಯಾಬ್ಯಾಸ: ಪ್ರಾಥಮಿಕ ಶಿಕ್ಷಣ- ಮುದ್ದೇನಹಳ್ಳಿ
ಪ್ರೌಢ ಶಿಕ್ಷಣ- ಬೆಂಗಳೂರು
ಬಿ.ಎ ಪದವಿ- ಮದ್ರಾಸ್ ವಿಶ್ವವಿದ್ಯಾಲಯ
ಬಿ.ಇ ಪದವಿ- ಸಿವಿಲ್ ಇಂಜಿನಿಯರಿಂಗ್, ಕಾಲೇಜ್ ಆಫ್ ಸೈನ್ಸ್, ಪೂಣೆ.
ನಿರ್ವಹಿಸಿದ ಜವಾಬ್ದಾರಿಗಳು: p.w.d ಇಂಜಿನಿಯರ್, ಮುಂಬೈ ( ಅಂದಿನ ಬೊಂಬಾಯಿ)
ದಿವಾನ್ ಆಫ್ ಮೈಸೂರ್. ಮತ್ತು ಹಲವಾರು...
ಪ್ರಮುಖ ಪ್ರಶಸ್ತಿಗಳು: The Knight Commander of The Indian Empire medal by British Emperors,
ಭಾರತ ರತ್ನ ಪ್ರಶಸ್ತಿ ೧೯೫೫.

ಅವರ ಸಾಧನೆಯನ್ನ ಗುರುತಿಸಿ ಅವರ ಜನ್ಮ ದಿನವನ್ನ "ಇಂಜಿನಿಯರ್'ಸ ಡೇ" ಎಂದು ಭಾರತ ಸರ್ಕಾರ ಘೋಷಿಸಿದೆ...

ಎಲ್ಲ ಅಭಿಯಂತರರಿಗೂ "ಇಂಜಿನಿಯರ್'ಸ ಡೇ" ಶುಭಾಶಯಗಳು....

ವಂದೇ ಮಾತರಂ...

3 comments:

  1. ನವೀನ್,

    ನನಗೆ ವಿಶ್ವೇಶ್ವರಯ್ಯ ಅಂದ್ರೆ ಇಷ್ಟ. ಇವತ್ತು ಅವರು ಹುಟ್ಟಿದ ದಿನ. ಅದಕ್ಕಾಗಿ ಶುಭಾಶಯಗಳು.

    ReplyDelete
  2. I am one of the fan of Sir M vishveshwaraiah

    ReplyDelete