Wednesday, September 23, 2009

ಹಣತೆ ೨೦೦೯ (೨೦-೨೧ ಸೆಪ್ಟೆಂಬರ್)

ನಮಸ್ತೆ
ಮೊನ್ನೆ ಭಾನುವಾರ ಮತ್ತು ಸೋಮವಾರ ವಿವೇಕ ಹಂಸ ಬಳಗ ನಡೆಸಿದ " ಸಾಂಸ್ಕೃತಿಕ- ಆಧ್ಯಾತ್ಮಿಕ- ವ್ಯಕ್ತಿತ್ವ ವಿಕಸನ" ಶಿಬಿರದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು ನಿಮಗಾಗಿ ...



ದ್ವಿತ್ರಯರು

ರಾಮಕ್ರಿಷಣ ಮಠದ ಅದ್ಯಕ್ಷರಾದ ಹರ್ಷನಂದ್ ಜೀ ಮಹಾರಾಜರಿಂದ ಚಾಲನೆ


"ಭಜಗೋವಿಂದಂ"-ಶ್ರೀ ಹರ್ಷಾನಂದ ಜೀ ಮಹಾರಾಜ್

"ದೂರದಿರಿ ಬದುಕ, ಬೆದಕರಿ ನಸುಕ"- ಶ್ರೀ ರಘೋತ್ತಮ ರಾವ್


" ಕಲಾಯೋಗ"- ಶ್ರೀ ಶತಾವಧಾನಿ ಗಣೇಶ್

"ಸದೃಢ ವ್ಯಕ್ತಿತ್ವ- ಸುಂದರ ಮನಸ್ಸು": ಡಾ. ಸಿ. ಅರ್ . ಸಿ

" ಜೀವಸಾಗರದ ಬಿಂದು, ಒಳಗನಂತ ಸಿಂಧು": ಶ್ರೀ ಗುರುರಾಜ್ ಕರಜಗಿ

"ಕಲಿಯುಗದ ಜೀವನ ಕಲೆ": ಶ್ರೀ ಬಸವರಾಜ್ ಪಾಟೀಲ್ ಸೇಡಂ

"ವಿವೇಕಾನಂದ ನಮಗಾನಂದ" : ಶ್ರೀ ಚಕ್ರವರ್ತಿ ಸೂಲಿಬೆಲೆ

"ನಗುನಗುತಾ ಬಾಳ್ ": ಶ್ರೀ ಮಾಸ್ಟರ್ ಹೀರಣಯ್ಯ


"ಭಕ್ತಿ ಕುಸುಮಾಂಜಲಿ": ಶ್ರೀಮತಿ ಎಂ. ಡಿ. ಪಲ್ಲವಿ


"ಜಾಗೋ ಭಾರತ್ ತಂಡದಿಂದ ದೇಶ ಭಕ್ತಿ ಗೀತೆಗಳ ಗಾಯನ"
"ಸಾರೆ ಜಹಂಸೆ ಅಚ್ಚ...." ಹಾಡಿಗೆ ಕೈ ಜೋಡಿಸಿದ ಕಂದಮ್ಮ

ವಂದೇ ಮಾತರಂ



Monday, September 14, 2009

ಶ್ರೀ ಸರ್. ಎಂ.ವಿ (೧೫-೦೯- ೧೮೬೦ ರಿಂದ ೧೪-೦೪-೧೯೬೨)

ನಮಸ್ತೆ

ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ತಮ್ಮ ಅಮೋಘ ಬುದ್ದಿಮತ್ತೆಯಿಂದ ರಾಷ್ಟ್ರದ ಚಿತ್ರವನ್ನೇ ಬದಲಿಸಿದ ಕರ್ನಾಟಕದ ಹೆಮ್ಮೆಯೇ ಪುತ್ರ ಸರ್.ಎಂ.ವಿ ಯವರಿಗೆ ಅನಂತ ಕೋಟಿ ವಂದನೆಗಳು.... ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ರಾಷ್ಟ್ರಸೇವೆಗೆ ತನ್ನನ್ನೇ ಅರ್ಪಿಸಿಕೊಂಡ ಮಹಾನುಭಾವನಿಗೆ ಜೈ ಹೋ...

ಸರ್.ಎಂ.ವಿ ಯವರ ಬಗ್ಗೆ ಸಂಕ್ಷಿಪ್ತ ವಿವರ:

ತಂದೆ-ತಾಯಿ: ಶ್ರೀ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಾಚಮ್ಮ
ಹುಟ್ಟಿದ ಊರು: ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.
ವಿದ್ಯಾಬ್ಯಾಸ: ಪ್ರಾಥಮಿಕ ಶಿಕ್ಷಣ- ಮುದ್ದೇನಹಳ್ಳಿ
ಪ್ರೌಢ ಶಿಕ್ಷಣ- ಬೆಂಗಳೂರು
ಬಿ.ಎ ಪದವಿ- ಮದ್ರಾಸ್ ವಿಶ್ವವಿದ್ಯಾಲಯ
ಬಿ.ಇ ಪದವಿ- ಸಿವಿಲ್ ಇಂಜಿನಿಯರಿಂಗ್, ಕಾಲೇಜ್ ಆಫ್ ಸೈನ್ಸ್, ಪೂಣೆ.
ನಿರ್ವಹಿಸಿದ ಜವಾಬ್ದಾರಿಗಳು: p.w.d ಇಂಜಿನಿಯರ್, ಮುಂಬೈ ( ಅಂದಿನ ಬೊಂಬಾಯಿ)
ದಿವಾನ್ ಆಫ್ ಮೈಸೂರ್. ಮತ್ತು ಹಲವಾರು...
ಪ್ರಮುಖ ಪ್ರಶಸ್ತಿಗಳು: The Knight Commander of The Indian Empire medal by British Emperors,
ಭಾರತ ರತ್ನ ಪ್ರಶಸ್ತಿ ೧೯೫೫.

ಅವರ ಸಾಧನೆಯನ್ನ ಗುರುತಿಸಿ ಅವರ ಜನ್ಮ ದಿನವನ್ನ "ಇಂಜಿನಿಯರ್'ಸ ಡೇ" ಎಂದು ಭಾರತ ಸರ್ಕಾರ ಘೋಷಿಸಿದೆ...

ಎಲ್ಲ ಅಭಿಯಂತರರಿಗೂ "ಇಂಜಿನಿಯರ್'ಸ ಡೇ" ಶುಭಾಶಯಗಳು....

ವಂದೇ ಮಾತರಂ...

Saturday, September 5, 2009

ಬ್ರಹ್ಮ+ವಿಷ್ಣು+ಮಹೇಶ್ವರ= ಗುರುವರ್ಯ

ನಮಸ್ತೆ
" ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರುವೇ ನಮಃ"
ಅರ್ಥ : ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು.

ಗುರಿ ಇರ ಬೇಕು ಮುಂದೆ ಗುರು ಇರಬೇಕು ಹಿಂದೆ ಎಂಬ ಮಾತು ಎಷ್ಟು ಸತ್ಯವಲ್ಲವೇ.... ಈ ದಡ್ಡನಿಗೆ ವಿದ್ಯಾದಾನ ಮಾಡಿದ ಎಲ್ಲ ಶಿಕ್ಷಕರಿಗೆ ಅನಂಥಕೋಟಿ ನಮಸ್ಕಾರಗಳು ಹಾಗು ಶಿಕ್ಷರ ದಿನಾಚರಣೆಯ ಶುಭಾಶಯಗಳು .ಇಂದು ನಾನೇನಾದರೂ ಸಾದಿಸಿದ್ದರೆ ಅದಕ್ಕೆ ಕಾರಣ ನನ್ನ ಶಿಕ್ಷಕರು. ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿ ತೀಡಿ ತಿದ್ದಿದಂತಹ ನನ್ನ ಶಿಕ್ಷಕರನ್ನು ನೆನಪು ಮಾಡಿಕೊಳ್ಳುವುದು ನನ್ನ ಅದಮ್ಯ ಕರ್ತವ್ಯ.
ಜೊತೆಗೆ ಶಿಕ್ಷಕ ವೃತ್ತಿಯನ್ನು ಕೀಳಾಗಿ ಕಾಣುವ ಜನೆರೆಡೆಗೆ ಒಂದು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತ ಈ ಲೇಖನವನ್ನು ಮುಗಿಸುತ್ತೇನೆ.

ಶ್ರೀ ಪುಜ್ಯನಿಯ ಸರ್ವೆಪಲ್ಲಿ ರಾಧಾಕೃಷ್ಣನ್




ವಂದೇ ಮಾತರಂ...