Wednesday, July 21, 2010

ನನ್ನ ಕೂಸಿಗೊಂದು ಹೊಸ ಹೆಸರು.....

ನಮಸ್ತೆ

ಆತ್ಮಿಯ ಗೆಳೆಯರಿಗೆಲ್ಲ ನನ್ನ ಪ್ರೀತಿಯ ನಮಸ್ಕಾರ. ನಾನು ಏನೇ ಗೀಚಿದರು ಅದಕ್ಕೆ ಕಾಮೆಂಟ್ ಸಿ ನನ್ನನ್ನು ಬೆನ್ನು ತಟ್ಟಿ ಮತ್ತಷ್ಟು ಗೀಚಲು ಪ್ರೋತ್ಸಾಹಿಸಿದ ಬ್ಲಾಗ್ ಪ್ರಪಂಚದ (ಕುಟುಂಬದ) ಎಲ್ಲರಿಗು ಪ್ರಣಾಮಗಳು. naveenanindian.blogspot.com ಎಂಬ ಹೆಸರಿನೊಂದಿಗೆ ಬ್ಲಾಗ್ ಪ್ರಪಂಚಕ್ಕೆ ಈ ಪುಟ್ಟ ಹೆಜ್ಜೆ ಗಳ್ಳನ್ನ ಇಟ್ಟಿದ್ದೆ.
ಅದೇನೋ ಸರಿ, ನನಗೋ ಹಳ್ಳಿ ಹುಡುಗ ಎಂದು ಹೇಳಿಕೊಳ್ಳಲು ಏನೋ ಒಂದು ತರಹದ ಹಪಾಹಪಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಆ ಹಕ್ಕು ನನಗೆ ಇದೆ ಎಂದು ಬಾವಿಸುತ್ತೇನೆ. (ಜಾಗತಿಕಾರಣದ ಹೊಡೆತಕ್ಕೆ ಸಿಕ್ಕಿ ಹಳ್ಳಿಯ ವಾತಾವರಣ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಮನಸ್ಸು ಆಗಾಗ ನನ್ನನ್ನು
ದುಃಖದ ಮಡುವಿನಲ್ಲಿ ದೂಡಿಬಿಡುತ್ತದೆ- ಇದು ಮತ್ತೊಂದು ಕಾರಣ).
ಆದರಿಂದ ನನ್ನ ಬ್ಲಾಗಿಗೆ ಮರು ನಾಮಕರಣ ಮಾಡಲು
ನಿರ್ದರಿಸಿ
ಹಲವು ಹೆಸರುಗಳನ್ನ ಹುಡುಕುತಿದ್ದಾಗ ನನಗೆ ಹೊಳೆದಿದ್ದು ಈ ಹೆಸರು ಹಳ್ಳಿಹುಡುಗನಮಾತು(hallihuduganamaathu).
ಈ ಹಳ್ಳಿ ಹುಡುಗನಿಗೆ ನಿಮ್ಮೆಲ್ಲರ ಪ್ರೀತಿ- ಪ್ರೋತ್ಸಾಹ ಈಗೆ ಮುಂದುವರೆಯಲಿ ಎಂದು ಕೋರುತ್ತೇನೆ.
ವಂದೇ ಮಾತರಂ

Friday, July 16, 2010

ಬಸವನ ಬಾಗೇವಾಡಿ- ಬಿ(ವಿ)ಜಾಪುರ ಜಿಲ್ಲೆ....

ನಮಸ್ತೆ
ಆಗಿನ ಕಾಲದಲ್ಲೇ ಜಾತಿ- ಪಂಗಡಗಳ್ಳನ್ನ ದೂರ ಸರಿಸಿದ ಮಹಾನ್ ವ್ಯಕ್ತಿ ದೇಶ ಕಂಡ ಅಪ್ರತಿಮ ವಚನಕಾರ- ಸಂತ ಶ್ರೀ ಬಸವಣ್ಣ ನವರ ಜನ್ಮ ಸ್ಥಳ ಬಸವನ ಬಾಗೇವಾಡಿ- ಬಿ(ವಿ)ಜಾಪುರ ಜಿಲ್ಲೆ . ಬಿಜಾಪುರ ನಗರದಿಂದ 43 ಕಿಲೋ ಮೀಟರ್ ಬಸ್ ಪಯಣದ ನಂತರ ಸಿಗುವ ಒಂದು ಪಟ್ಟಣ . ಇತ್ತಿಚಿಗೆ ಬೇಟಿ ಕೊಟ್ಟಾಗ ಅಲ್ಲಿ ತೆಗೆದ ಕೆಲವು ಫೋಟೋಗಳು ನಿಮಗಾಗಿ.....























ಬಸವ ತೀರ್ಥ

ವಂದೇ ಮಾತರಂ


Saturday, June 12, 2010

ಬ್ರಹ್ಮ ಕಮಲ.. ದಿ ಕಿಂಗ್ ಆಫ್ ಹಿಮಾಲಯನ್ ರೀಜನ್...

ನಮಸ್ತೆ
ಬ್ರಹ್ಮ ಕಮಲ ಎಂದೇ ಕರೆಯಲ್ಪಡುವ ಈ ಹೂವು ನಮ್ಮ ಮನೆಯ ಕಂಪೌಂಡಿನ ಗಿಡದಲ್ಲಿ ಅರಳಿದಾಗ ನನ್ನ ಕ್ಯಾಮೆರಾ ಕಣ್ಣು ಸುಮ್ಮನಿರಲಾರದೆ ಕ್ಲಿಕ್ಕಿಸಿದ ಕೆಲವು ಫೋಟೋಗಳು... ರಾತ್ರಿಯಲ್ಲೇ ಅರಳುವುದು ಈ ಹೂವಿನ ಇನ್ನೊಂದು ವಿಶೇಷತೆ...

ಸಂಜೆ 6:05
ಸಂಜೆ 6:05
ಸಂಜೆ 6:05
ಸಂಜೆ 6:05
ಸಂಜೆ 7:10

ಸಂಜೆ :೩೦
ರಾತ್ರಿ 8:00

ರಾತ್ರಿ 8:30
ವಂದೇ ಮಾತರಂ....


Monday, May 17, 2010

ನನ್ನ ಮೊದಲ ಗೀತೆ....


ನಮಸ್ತೆ

ಇತ್ತೀಚಿಗೆ ಕಾಣಿಪಾಕಂ ಗೆ ಬೆಟ್ಟಿ ಕೊಟ್ಟಾಗ, ದೇವರ (ವಿಗ್ರಹ ) ದರ್ಶನಕ್ಕಾಗಿ ಸರದಿಯಲ್ಲಿ ನಿಂತಿರುವಾಗ ಮನಸ್ಸಿಗೆ ಒಲಿದ ಜೀವನದ ಮೊದಲ ಗೀತೆ...

శ్రీ రామ నా రామ
శ్రీ రామ నా రామ
శ్రీ రామ నా రామ రా!!!

నువుంట్టే నా తోడూ
నువుంట్టే నా తోడూ
నాకింకా బయం ఎలార

నువంట్టే నాకిష్టం
నువంట్టే నాకిష్టం
నువులేఖ నా కష్టం
అడిగేది ఎవరు రా...

నీ చోటు నేనుంట్టే
నా తోడు నువుంట్టే
నాకదే స్వర్గమురా...

సీతమ్మ నా తల్లి
నువయ్య నా తండ్రి
నాకదే భాగ్యమురా..

నీ నామం జపిస్తూ
నీ నామం జపిస్తూ
కల కాలం బ్రతుకేస్తారా!!!

శ్రీ రామ నా రామ
శ్రీ రామ నా రామ
శ్రీ రామ నా రామ రా !!!


ವಂದೇ ಮಾತರಂ

Saturday, January 2, 2010

ಹೊಸ ವರ್ಷದ ಶುಭಾಶಯಗಳು...


ನಮಸ್ತೆ
ಸರ್ವರಿಗೂ ಹೊಸವರ್ಷವು ಶುಭತರಲೆಂದು ಕೋರುತ್ತೇನೆ. ವರ್ಷದ ಮೊದಲ ಅಂಕಣವನ್ನ, ನನ್ನ ಆತ್ಮಿಯ ವಿದ್ಯಾರ್ಥಿ (ಗೆಳೆಯ, ಸಹೋದರ ) ಜಯ ಭಾರ್ಗವ್ ನನಗಾಗಿ ರಚಿಸಿರುವ ಕವನ ದೊಂದಿಗೆ ಶುರು ಮಾಡಲು ಇಚ್ಚಿಸುತ್ತೇನೆ. ಧನ್ಯವಾದಗಳು ಭಾರ್ಗವ್...


ಹೊಸದಾದ ಈ ವರುಷ
ತರುತಿರಲಿ ನವ ಹರುಷ
ಕೂಡಿರಲಿ ನವ ಕನಸುಗಳ ಉಲ್ಲಾಸ
ಕಳೆಯುತಲಿ ದುಃಖ ದುಮ್ಮಾನಗಳ ಆಯಾಸ

ಹಿಂದಿನಾ ವರ್ಷದ ....ಸಿಹಿಕಹಿ ನೆನಪುಗಳ
ಮೆಲುಕು ಹಾಕುವಾ ಕಾಲ
ಮುಂದಿನಾ ಯುಗಕೆ
ಮುನ್ನುಡಿಯ ಬರೆಯುವಾ ಕಾಲ
ಹಿಂದೆ ಮುಂದಿನಾ ನಡುವೆ
ತಂದಿಳಿಸಿದೆ ಈ ಬಾಳ ಜಾಲ

ಹೊಸವರ್ಷದ ಈ ಹರುಷ
ಸಂಭ್ರಮಿಸದಿರಲಿ ಕೇವಲ ಪ್ರಥಮ ದಿವಸ
ಬಾಳೆಂಬ ನೌಕೆಯಲಿ ಅನುಕ್ಷಣವೂ
ಚಿಮ್ಮುತಿರಲಿ ಚೈತನ್ಯ ಸ್ಪರ್ಶ

ಉರುಳಲಿ ಕಾಲವು ಅದೆಷ್ಟೇ
ಬದಲಾಗದು ಈ ಭಾವುಕ ಮನಸಿನ ನಿಷ್ಠೆ
ಆಗಿರಲಿ ಈ ನಮ್ಮ ಬಂಧನ
ಸದಾ ಕಾಲ ಚಿರನೂತನ ....ನವನವೀನ

ವಂದೇ ಮಾತರಂ..

Sunday, November 15, 2009

ನಮ್ಮ ಶಿವಣ್ಣ ಹಾಗು ಪ್ರಕಾಶಣ್ಣ ನವರ ಪುಸ್ತಕ ಬಿಡುಗಡೆ....

ನಮಸ್ತೆ


ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಅಕ್ಷಯ ಪ್ರಕಾಶನದವರು ಹಮ್ಮಿಕೊಂಡಿದ್ದರು.. ಅದೇನೋ ಒಂದು ರೀತಿಯ ಕಂಡರಿಯದ ಸಂಭ್ರಮ ಸಡಗರ ಅಲ್ಲಿ ತುಂಬಿತ್ತು. ಬ್ಲಾಗ್ ಲೋಕದ ಮಿತ್ರರನೇಕರು ಅಲ್ಲಿ ನೆರೆದಿದ್ದರು. ಮೂರು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದವರೇ ಪುಸ್ತಕ ಬಿಡುಗಡೆ ಮಾಡಿದ್ದೂ ವಿಶೇಷ. ಪ್ರಕಾಶಣ್ಣನ " ಹೆಸರೇ ಬೇಡ" ಪುಸ್ತಕವನ್ನು ಪ್ರಸಿದ್ದ ಅಂಕಣಕಾರರಾದ ಶ್ರೀ ಜೀ.ಏನ್. ಮೋಹನ್ ರವರು, ಶಿವಣ್ಣನ " ವೆಂಡರ್ ಕಣ್ಣು" ಪುಸ್ತಕವನ್ನು ಶ್ರೀ ನಾಗೇಶ್ ಹೆಗ್ಡೆ ರವರು ಮತ್ತು ದಿವಾಕರ್ ಹೆಗ್ಡೆ ರವರ " ಉದ್ದಾರ -ಸಂತೆ" ಪುಸ್ತಕವನ್ನುಶ್ರೀ ಡಾ. ಬಿ.ವಿ. ರಾಜಾರಾಂ ರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ನಾಲ್ಕು ಮಾತನಾಡಿದರು.
ಪುಸ್ತಕಗಳ್ಳನ್ನು ಯಾರಾದರು ಲೇಖಕರೋ ಅಥವಾ ಸಾಹಿತಿಗಳೋ ಬರೆದಿದಲ್ಲಿ ಅಂತಹ ವಿಶೇಷವೇನು ಇರುತ್ತಿರಲ್ಲಿ. ಆದರೆ ನಾನು ಈಗ ಪರಿಚಯಿಸುತ್ತಿರುವ ಇಬ್ಬರು ವ್ಯಕ್ತಿಗಳು ನನಗೆ ಹಾಗು ನಮ್ಮೆಲರಿಗೆ ಸ್ಪೂರ್ತಿಯ ಚಿಲುಮೆಯನ್ನ ಚಿಮ್ಮುವಂಥಹವ್ಯಕ್ತಿತ್ವ ಉಳ್ಳವರು..
ಅವರ ಅನುಮತಿಯಿಲ್ಲದೆ ಅವರ ಬಗ್ಗೆ ಬರೆಯುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.
ಮೊದಲಿಗೆ ಶಿವಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಒಬ್ಬ ದಿನಗೂಲಿ ನೌಕರನ ಮಗನಾಗಿ ಜನಿಸಿ, ಸಣ್ಣ ವಯಸ್ಸಿನಲ್ಲೇ ವಿದ್ಯಾಬ್ಯಾಸ ಮುಂದುವರಿಸುತ್ತ ಪೇಪರ್ ಹಾಕುವ ಹುಡುಗನಾಗಿ ದುಡಿಯಲು ಶುರು ಮಾಡಿ, ನಂತರ ಅದ್ದನ್ನೇ ವೃತ್ತಿಯನ್ನಾಗಿಸಿಕೊಂಡು ಇಂದು ಪೇಪರ್ ಏಜೆಂಟ್ ಆಗಿ, ಪ್ರವೃತ್ತಿಯಲ್ಲಿ ಅಂತಾರಾಷ್ಟ್ರೀಯ ಫೋಟೋಗ್ರಾಫ್ ಆಗಿ ಖ್ಯಾತಿಗಳಿಸಿರುವ, ಹಲವಾರು ಪತ್ರಿಕೆಗಳಿಗೆ ಚಿತ್ರ ಲೇಖನ ಗಳ್ಳನ್ನು ಬರೆದಿರುವ ಇವರು, ಇಂದು ನಮ್ಮ ಮುಂದೆ ಒಂದು ಪುಸ್ತಕದ ಕರ್ತೃಗಳಾಗಿ ನಿಲ್ಲುತ್ತಿರುವುದೇ ಒಂದು ಅವಿಸ್ಮರಣೀಯ ವಿಷಯ. ಸಾಮಾನ್ಯವಾಗಿ ತಾವು ಬರೆಯುವ ಪುಸ್ತಕ ಗಳ್ಳನ್ನ ತಮ್ಮ ಹೆಂಡತಿಗೋ, ಮಕ್ಕಳಿಗೋ, ತಂದೆ- ತಾಯಿಯವರಿಗೋ ಅರ್ಪಿಸುವುದು ಸರ್ವೇ ಸಾಮಾನ್ಯ, ಆದರೆ ನಮ್ಮ ಶಿವಣ್ಣ ತಾನು ಬರೆದ ಪುಸ್ತಕವನ್ನು ಅರ್ಪಿಸಿರುವುದ್ದನ್ನು ನೀವು ತಿಳಿದರೆ ಅವರ ವ್ಯಕ್ತಿತ್ವ ಎಂಥವುದೆಂದು ತಿಳಿಯುತ್ತದೆ.
ಚಳಿ, ಗಾಳಿ, ಮಳೆ ಎನ್ನದೇ...
ತಣ್ಣನೆ ಮುಂಜಾವಿನಲ್ಲಿ.....
ಬೆಚ್ಚನೆಯ ಬೆಳಗು ತರುವ...
ಅಸಂಖ್ಯಾತ, ಅನಾಮಿಕ...
ದಿನಪತ್ರಿಕೆ ಹಂಚುವ....
ಹುಡುಗರಿಗೆ....
ಅವರ ಲೇಖನಗಳ್ಳನ್ನು ಓದಲು ಅವರ ಬ್ಲಾಗ್ ಹೊಕ್ಕಿ ನೋಡಿ: http://chaayakannadi.blogspot.com/

ಎರಡನೆಯದಾಗಿ ಪ್ರಕಾಶಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಇಟ್ಟಿಗೆ- ಸಿಮೆಂಟ್ ಖ್ಯಾತಿಯ ಪ್ರಕಾಶಣ್ಣ ವೃತ್ತಿಯಲ್ಲಿ ಒಬ್ಬ ಸಿವಿಲ್ ಇಂಜಿನಿಯರ್. ಆವರು ತಮ್ಮ ಬ್ಲಾಗ್ನಲ್ಲಿ ಬರೆಯುತಿದ್ದ ಲೇಖನಗಳ್ಳನ್ನು ಒಟ್ಟು ಗೂಡಿಸಿ ಹೊರ ತಂದಿರುವ ಹಾಸ್ಯ ಭರಿತ ಪುಸ್ತಕವೇ "ಹೆಸರೇ ಬೇಡ". ಅವರ ಬ್ಲಾಗ್ ವಿಳಾಸ : http://ittigecement.blogspot.com/


ಡಾ. ಬಿ. ವಿ. ರಾಜರಾಮ್ ರೊಂದಿಗೆ...
ಎಡದಿಂದ ಬಲಕ್ಕೆ: ಶಿವಣ್ಣ, ಜೀ.ಏನ್.ಮೋಹನ್, ಡಾ.ಬಿ.ವಿ.ರಾಜಾರಾಂ, ನಾಗೇಶ್ ಹೆಗ್ಡೆ, ಯಶವಂತ್ ಸರ್ದೇಶ್ ಪಾಂಡೆ, ದಿವಾಕರ್ ಹೆಗ್ಡೆ, ಸೀತಾರಾಮ ಹೆಗ್ಡೆ ಹಾಗು ಪ್ರಕಾಶಣ್ಣ.

ವಂದೇ ಮಾತರಂ