Wednesday, July 15, 2009

ಇನ್ಫೋಸಿಸ್ ಎಂಬ ಮಹಾನಗರಿಯಲ್ಲಿ...

ನಮಸ್ತೆ
ಒಬ್ಬ ಸಾಮಾನ್ಯ ಶಾಲಾ ಮೇಷ್ಟ್ರ ಮಗ ಎಂಥಹ ಮಹಾನ್ ಸಾಧನೆಯನ್ನ ಮಾಡಬಹುದು ಎಂದು ನೋಡಲು ಒಮ್ಮೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಇನ್ಫೋಸಿಸ್ ಸಂಸ್ಥೆಗೆ ಹೋಗಿ ಬನ್ನಿ. ೨೮ ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಇಂಜಿನಿಯರ್ ಒಬ್ಬ ಕನಸು ಕಂಡದರ ಪರಿಣಾಮ ಇಂದು ಸಾವಿರಾರು ಕೋಟಿ ಬಾಳುವ , ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಭಾರತ ಮಾತೆಯ ಕೀರ್ತಿ ಪತಾಕೆಯನ್ನ ಪ್ರಪಂಚದೆಲ್ಲೆಡೆ ಪಸರಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ರತ್ನ ಶ್ರೀ ನಾರಾಯಣ ಮೂರ್ತಿಯಾವರಿಗೆ ಮತ್ತು ಅವರ ಸಂಗಡಿಗರಿಗೂ ಜೈ ಹೋ .
೧೯೯೯ರಲ್ಲಿ ನಾನು ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ ದಿನಗಳಿಂದಲೂ ನಾನು ಇನ್ಫೋಸಿಸ್ ಕಟ್ಟಡಗಳ್ಳನ್ನು ನೋಡಿ ಎಂದಾದರೂ ಒಂದು ದಿನ ಇಲ್ಲಿ ಪ್ರವೇಶ ಪಡೆಯಬೇಕೆಂಬ ಆಸೆ ನನ್ನ ಮನದಾಳದಲ್ಲಿ ಮೂಡಿತ್ತು .(ಬೆಂಗಳೂರಿನಿಂದ ನಮ್ಮ ಊರಿಗೆ ಹೋಗುವ ದಾರಿಯಲ್ಲಿ ಮುಖ್ಯರಸ್ತೆಯಲ್ಲೇ ಸಿಗುತ್ತದೆ).
ಮೊನ್ನೆ ಶಿಕ್ಷಕರಿಗಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೫ ದಿನಗಳ ಕಾರ್ಯಗಾರ ಒಂದಕ್ಕೆ ನಮ್ಮ ಕಾಲೇಜನ್ನು ಪ್ರತಿನಿದಿಸುವ ಅವಕಾಶ ನನಗೆ ಸಿಕ್ಕಾಗ ಏನೋ ಒಂದು ಕಂಡರಿಯದ ಆನಂದವನ್ನು ಅನುಭವಿಸಿದೆ. ಜೂನ್ ೨೨ ರಿಂದ ೨೬ ರವರೆಗೆ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಒಂದಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ. ಇತರೆ ಕಾಲೇಜುಗಳಿಂದ ಬಂದಿದ್ದ ಶಿಕ್ಷಕ ವೃಂದದ ಪರಿಚಯವು ಆಯಿತು.
ಅಲ್ಲಿ ಕ್ಲಿಕ್ಕಿಸಿದ ಒಂದಷ್ಟು ಫೋಟೋಗಳು...

ನಮ್ಮ ಪ್ರಾಜೆಕ್ಟ್ ಟೀಂನೊಂದಿಗೆ
ಹರ್ಕುಲೆಸ್ ಆಗುವ ಪ್ರಯತ್ನದಲ್ಲಿ

ಗೆಳೆಯ ಗಿರೀಶ್ ನೊಂದಿಗೆ ಎಲೆಕ್ಟ್ರಿಕ್ ಕಾರ್ ನಲ್ಲಿ

ಉದ್ಯಾನವನದಲ್ಲಿ




ನಮಗೆ ಅಚ್ಚುಕಟ್ಟಾಗಿ ಊಟ ಬಡಿಸಿದ ಸ್ನೇಹಿತ ರಾಜೇಶ್ ನೊಂದಿಗೆ...

ನನ್ನನ್ನು ಹೊರಲಾಗದೆ ಪಂಕ್ಚರ್ ಆದ ಬಡ ಸೈಕಲ್..

ಪಿರಮಿಡ್ ನಂತೆ ಕಾಣುವ ಗಾಜಿನ ಮನೆಯ ಮುಂದೆ..
ಕ್ಯಾಪ್ಶನ್ ನೀವೇ ಬರೆದುಕೊಳ್ಳಿ
ವಂದೇ ಮಾತರಂ

Monday, July 6, 2009

ನೋಡುವಾಸೆ???

ನಮಸ್ತೆ

ನನ್ನ ಸ್ನೇಹಿತ ವೇಣು ಗೋಪಾಲ್ ರೆಡ್ಡಿ ಬರೆದ ಕವನವನ್ನು ಅವರ ಅನುಮತಿಯೊಂದಿಗೆ ನಿಮಗಾಗಿ....

ಸಾಂಸ್ಕೃತಿಕ ಪರಂಪರೆಯ
ಸಾಮಾಜಿಕ ಮೌಲ್ಯಗಳ
ಕುಸಿತಕ್ಕೆ ಕಾರಣರಾಗಿರುವ
ದೇಶದ್ರೋಹಿಗಳ ಸಾಲಿಗೆ
'ಭಗತ್ ಸಿಂಗ್'ನಾಗುವಸೆ !

ನಿರಂಕುಶಮತಿಗಳಾಗಿ
ಅರಾಜಕತೆಯಲ್ಲಿ ತೊಡಗಿ
ದೇಶದ ಅಭಿವೃದ್ಧಿಗೆ ಅಡಚಣೆಯಾಗಿರುವ
ಭ್ರಷ್ಟರಾಜಕಾರಣಿಗಳ ಮಟ್ಟಿಗೆ
ಸರ್ವಧಿಕಾರಿ 'ಹಿಟ್ಲರ್' ನಾಗುವಸೆ!

ಬಡತನದಿಂದ ಬೆಂದು
ಅನಾರೋಗ್ಯದಿಂದ ಬಳಲಿ
ಅನಕ್ಷರತೆಯಿಂದ ಅನಾಥರಾಗಿರುವ
ನಿರ್ಭಾಗ್ಯವನ್ಥರಿಗೆ ದಾರಿದೀಪವಾಗಲು
'ಮದರ್ ಥೆರೆಸ' ಆಗುವ ಕಿರಿದಾಸೆ!

ನಿರುದ್ಯೋಗದಿಂದ ಕಂಗೆಟ್ಟು
ನಿರಾಶಾವಾದಿಗಳಾಗಿ ಅಧೀರರಾಗಿರುವ
ಯುವ ಜನತೆಗೆ ಆಸರೆ ನೀಡಲು
ಸ್ಪೂರ್ತಿಯ ಚಿಲುಮೆ
'ಸ್ವಾಮಿ ವಿವೇಕಾನಂದ'ರಾಗುವ ಹಿರಿದಾಸೆ!

ಮತಿಯ ಗಲಭೆ, ಮತಾಂತರ ನಿಲ್ಲಿಸಲು
ಪ್ರಕೃತಿಯನ್ನು ರಕ್ಷಿಸಿ
ಜನತೆಯಲ್ಲಿ ಸಹೋದರತ ಭಾವವನ್ನು ಬೆಳೆಸಲು
ನಮ್ಮ ಮತ ಮನುಜ ಮತ ಎಂದ
ರಾಷ್ಟ್ರ ಕವಿ 'ಕುವೆಂಪು' ಆಗುವ ಮಹದಾಸೆ!

ಸುಸಂಸ್ಕ್ರುತಿಯಿಂದ ಕೂಡಿದ
ಜತ್ಯಾತೀತತೆಯನ್ನು ಮೈಗೂಡಿಸಿಕೊಂಡ
ಅಭಿವೃದ್ದಿಶೀಲ ರಾಷ್ಟ್ರಗಳಲ್ಲೊಂದಾದ
ನನ್ನ 'ಭಾರತ' ವನ್ನು ನೋಡುವಾಸೆ
ಇದು ನನ್ನ, ನನ್ನ ಕೊನೆಯ ಆಸೆ!!!!

ಇಷ್ಟವಾದರೆ ನನ್ನ ಸ್ನೇಹಿತನಿಗೆ ಒಂದು ಪತ್ರ ಬರೆಯರಿ... ಅವರ ಇ-ಮೇಲ್ ವಿಳಾಸ veeranuma80@gmail.com..

ವಂದೇ ಮಾತರಂ...